ಸಾಮಾನ್ಯವಾಗಿ ಐಎಎಸ್ ಅಧಿಕಾರಿ ಅಂದ್ರೆ ಒಂದು ಗತ್ತು ಗೈರತ್ತು ಇರುತ್ತೆ.. ಸರ್ಕಾರದ ಯೋಜನೆಗಳನ್ನು ಜಾರಿ ಮಾಡಲು ಅಗತ್ಯ ಸೂಚನೆಗಳನ್ನು ನೀಡ್ತಾರೆ.. ಬಹುತೇಕ ಅವರು ಜನರ ನಡುವೆ ಬೆರೆಯೋದು ಕಡಿಮೆ.. ಇತ್ತೀಚಿಗೆ ದೆಹಲಿಯಲ್ಲಿ ಐಎಎಸ್ ಅಧಿಕಾರಿಯೊಬ್ರು ಮನೆಯ ನಾಯಿಗೆ ವಾಕ್ ಮಾಡಿಸಲು ಸ್ಟೇಡಿಯಂ ಮುಚ್ಚಿಸಿದ್ರು.. ಆದ್ರೆ, ಅಸ್ಸಾಂನಲ್ಲಿ ಸೇವೆ ಸಲ್ಲಿಸ್ತಿರುವ ವರಂಗಲ್ ಮೂಲದ ಐಎಎಸ್ ಅಧಿಕಾರಿ ಕೀರ್ತಿ ಜಲ್ಲಿ ಇದಕ್ಕೆ ಭಿನ್ನ. ಅಸ್ಸಾಂ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಾಮಾನ್ಯ ಜನರಿಗೆ ಖುದ್ದಾಗಿ ನೆರವಾಗುತ್ತಿದ್ದಾರೆ. ಸಂತ್ರಸ್ತರಿಗೆ ನೆರವಾಗುವ ಭರದಲ್ಲಿ ತಮ್ಮ ವೇಷಧಾರಣೆಯನ್ನು ಕೂಡ ಆಕೆ ಗಮನಿಸಿಕೊಂಡಂತಿಲ್ಲ. ತುಂಬಾ ಸಾದಾಸೀದಾ ಸೀರೆ ಧರಿಸಿ, ಯಾವುದೇ ಮೇಕಪ್ ಕೂಡ ಇಲ್ಲದೇ, ಕೆಸರು ನೀರು ಎನ್ನದೇ ಸಂತ್ರಸ್ತರ ಕಷ್ಟ ಆಲಿಸಿ, ಅಗತ್ಯವಾದ ನೆರವನ್ನು ಕಲ್ಪಿಸಲು ಶ್ರಮಿಸ್ತಾ ಇದ್ದಾರೆ. ಇವರ ಫೋಟೋಗಳೀಗ ಫುಲ್ ವೈರಲ್ ಆಗಿವೆ. 2013ರ ಬ್ಯಾಚ್ನ ಅಧಿಕಾಸರಿಯಾದ ಇವರು, ಅಸ್ಸಾಂ ಕಾರ್ಮಿಕ ಮಹಿಳೆಯರನ್ನು ಮತ್ತು ಮಕ್ಕಳನ್ನು ಕಾಡುವ ರಕ್ತಹೀನತೆ, ಪೌಷ್ಠಿಕಾಂಶ ಕೊರತೆ ಸಮಸ್ಯೆ ನೀಗಿಸಲು ಸ್ಥಳೀಯವಾಗಿ ಸಿಗುವ ನೆಲ್ಲಿಕಾಯಿಯನ್ನು ನಿತ್ಯದ ಆಹಾರದಲ್ಲಿ ಬಳಸುವಂತೆ ಮಾಡಿ, ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡಿಸಿದ್ರು. 2020ರಲ್ಲಿ ಕೋವಿಡ್ ಕಾಲದಲ್ಲಿ ಮದ್ವೆಯಾದ ಇವರು, ಮದ್ವೆಯಾದ ಮರುದಿನವೇ ಕರ್ತವ್ಯಕ್ಕೆ ಮರಳಿದ್ರು.
#HRRanganath #NewsCafe #PublicTV